`ಆ ಎರಡು ವರ್ಷಗಳು` ಚಿತ್ರಕ್ಕೆ ಎರಡನೇ ಹಂತದ ಚಿತ್ರೀಕರಣ
Posted date: 20 Thu, Oct 2016 – 10:36:03 AM

ಪ್ರೇಮ ಕಥಾನಕ ಹೊಂದಿರುವ ‘ಆ ಎರಡು ವರ್ಷಗಳು ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ೨೦ ದಿನಗಳ ಚಿತ್ರೀಕರಣ ನಡೆದಿದೆ. ದ್ವಿತೀಯ ಹಂತದ ಚಿತ್ರೀಕರಣ ತೀರ್ಥಹಳ್ಳಿಯಲ್ಲಿ ಹತ್ತು ದಿನಗಳ ಕಾಲ ನಡೆಯಲಿದೆ. ರೇಣು, ಅಮಿತ್ ಕುಲಾಳ್, ರಾಮಕೃಷ್ಣ, ತ್ರಿವೇಣಿ ಮುಂತಾದವರು ಈ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.  

 ಅಭಿಮತ ಪ್ರಡಕ್ಷನ್ಸ್ ಲಾಂಛನದಲ್ಲಿ ರಿಷಿಕಾ ಮಧುಸೂಧನ್ ನಿರ್ಮಾಪಕರಾಗಿರುವ ಈ ಚಿತ್ರವನ್ನು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಮಧುಸೂಧನ್ ನಿರ್ದೇಶನ ಮಾಡುತ್ತಿದ್ದಾರೆ. ಕಿರುತೆರೆಯಲ್ಲಿ ಸೂಪರ್ ಹಿಟ್ ಆಗಿದ್ದ ಪಲ್ಲವಿ ಅನುಪಲ್ಲವಿ, ಮಿಲನ, ಅನುರೂಪ ಧಾರಾವಾಹಿಗಳನ್ನು ನಿರ್ದೇಶನ ಮಾಡಿ ಅನುಭವ ಹೊಂದಿರುವ ಮಧುಸೂಧನ್ ನಿರ್ದೇಶನದ ಮೊದಲ ಚಿತ್ರವಿದು.

ಅನುರೂಪ ಧಾರಾವಾಹಿಯಲ್ಲಿ ಅಭಿನಯಿಸಿದ್ದ ರೇಣು ಈ ಚಿತ್ರದ ನಾಯಕ. ಮಂಗಳೂರು ಹುಡುಗಿ ಅಮಿತಾ ಕುಲಾಳ್ ನಾಯಕಿಯಾಗಿದ್ದಾರೆ. ರಾಮಕೃಷ್ಣ, ತ್ರಿವೇಣಿ ಹಾಗೂ ಧಾರಾವಾಹಿ ಕ್ಷೇತ್ರದ ಅನೇಕ ಪ್ರತಿಭೆಗಳು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅನೂಪ್ ಸಿಳೀನ್ ಸಂಗೀತ, ರವಿ ಕಿಶೋರ್ ಛಾಯಾಗ್ರಹಣ ಹಾಗೂ ಅಕ್ಷಯ್ ಸಂಕಲನ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed